ಕೆಲಸದಿಂದ ಕಿತ್ತರೆಂದು ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಿದ, ಸಿಸಿಟಿವಿಯಲ್ಲಿ ಸೆರೆ! | ಜನತಾ ನ್ಯೂಸ್
ಬೆಂಗಳೂರು : ಕೆಲಸದಿಂದ ವಜಾ ಮಾಡಿದಕ್ಕೆ ಅಸಮಾಧಾನಗೊಂಡು ಸಿಬ್ಬಂದಿ ಅದೇ ರೆಸ್ಟೋರೆಂಟ್ನಲ್ಲಿ ಕಳ್ಳತನ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ನಾಗಾಲ್ಯಾಂಡ್ ಮೂಲದ ಆಟೋನಾಲ ಎಂಬಾತ ಕಳ್ಳತನ ಮಾಡಿದ ವ್ಯಕ್ತಿ. ಆರೋಪಿ ಆಟೋನಾಲ, ಜರಗನಹಳ್ಳಿ ಕೆಫೆರೋಶ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ.
ಈ ನಡುವೆ ಮದ್ಯ ಸೇವಿಸಿ ಗ್ರಾಹಕರ ಜೊತೆ ಅನುಚಿತ ವರ್ತನೆ ತೋರಿದ್ದ ಎನ್ನಲಾಗಿದ್ದು, ಆರೋಪಿಯ ದುರ್ವತನೆಯಿಂದ ಬೇಸತ್ತ ರೆಸ್ಟೋರೆಂಟ್ ಮಾಲೀಕ ಆಗಸ್ಟ್ 27 ರಂದು ಆತನಿಗೆ ಬಾಕಿ ಇರುವ ಸಂಬಳ ಕೊಟ್ಟು ಇನ್ಮುಂದೆ ಕೆಲಸಕ್ಕೆ ಬಾರದಾಗಿ ಹೇಳಿ ಕಳುಹಿಸಲಾಗಿತ್ತು.
ಇದರಿಂದ ಕುಪಿತಗೊಂಡ ಆರೋಪಿ ಆಟೋನಾಲ, ಕೆಲಸ ಬಿಡಿಸಿದ ಎರಡು ದಿನಗಳ ನಂತರ ಅಂದರೆ ಆಗಸ್ಟ್ 23ರಂದು ರೆಸ್ಟೋರೆಂಟ್ ಹಿಂಬದಿ ಪ್ಯಾಸೇಜ್ ನಿಂದ ಒಳಬಂದು, ಐವತ್ತು ಸಾವಿರ ನಗದು ಎಗರಿಸಿ ಎಸ್ಕೇಪ್ ಆಗಿದ್ದಾನೆ.
ಆರೋಪಿಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ರೆಸ್ಟೋರೆಂಟ್ ಮಾಲೀಕರು ಪುಟ್ಟೆನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.